*ಹಾನಗಲ್ಲ ನಗರದ ಹಳೇ ಬಸ್ ನಿಲ್ದಾಣದ ಹತ್ತಿರ ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನ*
ಇದು ಬಡವರ ಅಭಿಯಾನ. ಬೆವರನ್ನು ಸುರಿಸಿ ದುಡಿಯುವ ಜನರ ಬೆವರಿನ ಪಾಲನು ಕೇಳುವ ಅಭಿಯಾನ, ತುಂಡು ಭೂಮಿ, ಚಿಕ್ಕ ಮನೆ, ಮಕ್ಕಳ ಶಿಕ್ಷಣ, ಕುಟುಂಬದ ಆರೋಗ್ಯ, ಕಾರ್ಮಿಕರ ಕಲ್ಯಾಣಕ್ಕಾಗಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ದುಡಿಯುವ ವರ್ಗದ ಪ್ರತಿ ಬಡವನಿಗೆ ತಲುಪಿಸುವ, ಅವರ ಬದುಕನ್ನು ಕಟ್ಟಿಕೊಡುವ ಉದ್ದೇಶದಿಂದ ಕೈಗೊಂಡಿರುವ *ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನವು ಹಾನಗಲ್ಲ ನಗರದ ಹಳೇ ಬಸ್ ನಿಲ್ದಾಣದ ಹತ್ತಿರ ನಡೆಯಿತು.*
ಅಸಂಘಟಿತ ಕಾರ್ಮಿಕರ ಜಾಗೃತಿ ಅಭಿಯಾನವು ಸಮಾಜದ ದುಡಿಯುವ ವರ್ಗದ ಪ್ರತಿ ವ್ಯಕ್ತಿಯನ್ನು ಸಂಪರ್ಕಿಸಿ, ಜಾಗೃತಗೊಳಿಸಿ, ಸಂಘಟಿಸಿ, ಒಗ್ಗಟ್ಟಿಸಿ ಅವರ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸೌಲಭ್ಯ ವಂಚಿತರಾಗಿರುವ ಕಾರ್ಮಿಕರಿಗೆ ಸೌಲಭ್ಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿದೆ. ಸರ್ಕಾರದಿಂದ ಘೋಷಣೆಯಾಗಿ ಜಾರಿಯಾಗದೇ ಇರುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಹೋರಾಟಕ್ಕೂ ಅಣಿಯಾಗಿಸುತ್ತಿದೆ.
ಹಾವೇರಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ನಿಯಾಜ್ ಶೇಖ್, ಪುರಸಭೆ ಸದಸ್ಯರು, ಹಿರಿಯ ಮುಖಂಡರಾದ ನಜೀರ್ ಅಹ್ಮದ್ ಸವಣೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಹಿರೇಮಠ್, ಪುರಸಭೆ ಸದಸ್ಯರಾದ ರವಿ ದೇಶಪಾಂಡೆ, ಹಿರಿಯ ಮುಖಂಡರಾದ ಕೆ.ಎಲ್.ದೇಶಪಾಂಡೆ, ಹಿರಿಯರಾದ ಶಬ್ಬೀರ್ ಸಾಬ್, ಮರ್ದಾನ್ ಸಾಬ್,ಜಾಫರ್ ಸಾಬ್, ಕಾರ್ಮಿಕ ಮುಖಂಡರಾದ ಮೆಹಬೂಬ್ ಅಲಿ ನೆಗಳೂರು ಮತ್ತು ತಂಡ, ಕಾರ್ಮಿಕ ಮಹಿಳೆಯರು, ಯುವಕರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ 10 ಜನ ಕಾರ್ಮಿಕರಿಗೆ ಕಾರ್ಮಿಕರ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಹಾಗೂ 200 ಜನ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ದೊರಕಿಸಿ ಕೊಡಲು ಸಹಕಾರಿಯಾದ *ಮೆಹಬೂಬ್ ಅಲಿ ನೆಗಳೂರು* ರವರನ್ನು ಸನ್ಮಾನಿಸಲಾಯಿತು.